ಅಪಾಯವಿದೆ ಎಚ್ಚರಿಕೆ ಮೂಲಕ ಮಿಂಚಲು ರೆಡಿಯಾಗಿದ್ದಾರೆ ಅಣ್ಣಯ್ಯ ವಿಕಾಶ್ ಉತ್ತಯ್ಯ

Date:

ತೀರ್ಥಹಳ್ಳಿಯ ಯುವ ನಿರ್ದೇಶಕ ಅಭಿಜಿತ್ Abhijith Thirthahalli ಅವರ ಬಹಳಾ ವರ್ಷಗಳ ಕನಸೇ “ಅಪಾಯವಿದೆ ಎಚ್ಚರಿಕೆ” ( Apaayavide Eccharike ) ಚಲನಚಿತ್ರ. ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಬಹಳಷ್ಟು ಶ್ರಮಪಟ್ಟಿರುವ ಇವರಿಗೆ, ನಿರ್ಮಾಪಕ ಮಂಜುನಾಥ್ ಹಾಗೂ ಅವರ ಸಹೋದರಿ ಮಂಜುಳಾ ಬೆಂಬಲ ನೀಡಿ ಇದೀಗ ಈ ಚಿತ್ರದ ಮೋಷನ್ ಪೋಸ್ಟರ್ ಹೊರಬಂದಿದೆ. ಹತ್ತು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ದುಡಿದ ಅಭಿಜಿತ್ ತೀರ್ಥಹಳ್ಳಿಯವರ ಸ್ವತಂತ್ರ ನಿರ್ದೇಶದ ಮೊದಲ ಸಿನೆಮಾ ಇದಾಗಿದ್ದು ಇದೊಂದು ಹಾರರ್ ಜಾನರ್ ಸಿನೆಮಾ ಮತ್ತೆ ಸಸ್ಪೆನ್ಸ್ ಅಡ್ವೆಂಚರ್ ಸಿನೆಮಾವಾಗಿದೆ. ಹಾಗೇ ಪಂಚಭೂತಗಳ ಆಧಾರದಲ್ಲಿ ಮೂಡಿಬಂದಿರುವ ಈ ಚಿತ್ರದ ಒಂದೊಂದು ಪಾತ್ರ ಒಂದೊಂದು ತತ್ತ್ವಗಳನ್ನು ಪ್ರತಿಬಿಂಬಿಸುತ್ತದೆ.

ಕಿರುತೆರೆಯಲ್ಲಿ ಸಾಧನೆ ಮಾಡುತ್ತಾ ಸಿನೆಮಾ ಕ್ಷೇತ್ರದಲ್ಲಿ ಬೆಳೆಯುವ ಮಹತ್ವಾಕಾಂಕ್ಷೆ ಹೊಂದಿರುವ ಜೀ ಕನ್ನಡದ ಪ್ರಸಿದ್ಧ ಧಾರಾವಾಹಿ “ಅಣ್ಣಯ್ಯ” ದ ನಾಲ್ಕು ತಂಗಿಯರ ಮುದ್ದಿನ ಅಣ್ಣಯ್ಯನ ಪಾತ್ರಧಾರಿ Vikash Uthaiah ವಿಕಾಶ್ ಉತ್ತಯ್ಯ ಅವರು ಹೀರೋ ಪಾತ್ರದಲ್ಲಿದ್ದಾರೆ. ತಾರಾಗಣದಲ್ಲಿ ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ರಾಧಾ ಭಗವತಿ ಮುಂತಾದವರು ಇದ್ದಾರೆ. ಸುನಾದ್ ಗೌತಮ್ ಅವರು ಛಾಯಾಗ್ರಹಣದೊಂದಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ 3 ಹಾಡುಗಳಿದ್ದು, ‘ಆನಂದ್ ಆಡಿಯೋ’ ಮೂಲಕ ಬಿಡುಗಡೆ ಆಗಲಿವೆ. ಹರ್ಷಿತ್ ಪ್ರಭು ಸಂಕಲನ ಮಾಡಿದ್ದಾರೆ.

ಯುವ ಪ್ರತಿಭೆಗಳೆಲ್ಲರೂ ಸೇರಿ ಕೈ ಹಾಕಿರುವ ಈ ಹೊಸ ಸಾಹಸಕ್ಕೆ ಯಶಸ್ಸಾಗಲಿ, ಇನ್ನಷ್ಟು ಹೊಸ ಪ್ರತಿಭೆಗಳು ಮುನ್ನೆಲೆಗೆ ಬರಲಿ ಎಂಬುದು ಎಲ್ಲರ ಹಾರೈಕೆ.

Apaayavide Eccharike First Look Motion Poster

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು ಗ್ರಾಮ ಜೀವನದ ಕತೆ ಹೇಳುವ ಎರಡು ಚಿತ್ರಗಳು

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು...

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್ ನಿರ್ದೇಶಕ...

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್ ಆಗಸ್ಟ್ 22 ಕ್ಕೆ ಹೊರಬರಲಿದೆ ಸಿ.ಆರ್...

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು”

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು” ಹೊಸ ರಿಯಾಲಿಟಿ ಶೋ...