ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು”

Date:

  • ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು”
  • ಹೊಸ ರಿಯಾಲಿಟಿ ಶೋ ಇದೇ ಆಗಸ್ಟ್ 2 ರಿಂದ ರಾತ್ರಿ 9 ಗಂಟೆಗೆ ನಿಮ್ಮನ್ನು ಮನರಂಜಿಸಲಿದೆ.
  • ಜನಪ್ರಿಯ ನಟಿ ಅಮೂಲ್ಯ , ತಾರಾ ಅನುರಾಧ ಮತ್ತು ಖ್ಯಾತ ನಟ ಶರಣ್ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಝೀ ಕನ್ನಡ Zee Kannada ವಾಹಿನಿಯಲ್ಲಿ ಹೊಸತೊಂದು ರಿಯಾಲಿಟಿ ಶೋ ಶುರುವಾಗಲಿದ್ದು, ಈ ರಿಯಾಲಿಟಿ ಶೋ ಇಡೀ ಫ್ಯಾಮಿಲಿಯನ್ನೇ ಒಳಗೊಳ್ಳುವ ವಿಭಿನ್ನ ಮಾದರಿಯ ರಿಯಾಲಿಟಿ ಶೋ ಎನ್ನುವುದು ವಿಶೇಷ. ಹೌದು ಈ ಹೊಸ ನ ಹೆಸರು “ನಾವು ನಮ್ಮವರು” Navu Nammavaru ಈ ಹೊಚ್ಚ ಹೊಸ ರಿಯಾಲಿಟಿ ಶೋ ಇದೇ ಆಗಸ್ಟ್ 2 ರಿಂದ ರಾತ್ರಿ 9 ಗಂಟೆಗೆ ನಿಮ್ಮನ್ನು ಮನರಂಜಿಸಲಿದೆ.

ಸೆಲೆಬ್ರಿಟಿ ಮತ್ತು ಫ್ಯಾಮಿಲಿ

ಈ ಶೋನಲ್ಲಿ ವೀಕ್ಷಕರು ತಮ್ಮ ನೆಚ್ಚಿನ ತಾರೆಯರು ಅವರ ಕುಟುಂಬದವರ ಜೊತೆಗೆ ಹೇಗೆ ಇರುತ್ತಾರೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಸಕ್ಕತ್ ಟ್ವಿಸ್ಟ್ , ಸ್ವಲ್ಪ ಫನ್, ಫೀಲಿಂಗ್ ಎಲ್ಲವೂ ಈ ಶೋನಲ್ಲಿರಲಿದ್ದು ಪಕ್ಕಾ ಮನೋರಂಜನೆಯನ್ನಂತೂ ನೀಡಿಯೇ ನೀಡುತ್ತದಂತೆ. ಪ್ರತಿ ವಾರವೂ ವಿಭಿನ್ನ ಬಗೆಯ ರೌಂಡ್ಸ್ ಇರಲಿದ್ದು ಈ ರೌಂಡ್ಸ್ ಗಳಲ್ಲಿ ಯಾರು ಹೇಗೆ ಪರ್ಫಾರ್ಮ್ ಮಾಡ್ತಾರೆ ಎನ್ನುವುದು ಪ್ರೇಕ್ಷಕರಿಗೆ ಒಂದು ದೊಡ್ಡ ಅಚ್ಚರಿಯಾಗಿದೆ. ಈಗ ಬಂದಿರೋ ಅಪ್ಡೇಟ್ ಪ್ರಕಾರ, ಕಿರುತೆರೆಯ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ Niranjan Deshapande ಅವರು ಈ ಶೋ ವನ್ನು ನಿರೂಪಣೆ ಮಾಡಲಿದ್ದಾರೆ. ನಟಿ ಅಮೂಲ್ಯ, Amulya ಜನಪ್ರಿಯ ನಟಿ ತಾರಾ ಅನುರಾಧ Thara Anuradha ಮತ್ತು ಖ್ಯಾತ ನಟ ಶರಣ್ Sharan ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇವರೆಲ್ಲಾ ಭಾಗಹಿಸಲಿದ್ದಾರೆ

ಸೆಲೆಬ್ರಿಟಿಗಳಾದ ರಜತ್-ಅಕ್ಷತಾ, ಸುಜಯ್-ಸಿಂಚನ, ಪ್ರಿಯ ಕೇಸರಿ-ಶಿವರಾಂ, ಅಲ್ಲು ರಘು-ಸುಶ್ಮಿತಾ, ಮಲ್ಲಯ್ಯ-ನೀಲಮ್ಮ, ಮೋಹನ್ ಕುಮಾರ್-ಪಲ್ಲವಿ, ವಿಶಾಲ್ ಹೆಗ್ಡೆ-ಪ್ರಿಯ, ಶಿಲ್ಪಿ-ಶೈಲೇಶ್, ಸಮೀರ್ ಆಚಾರ್ಯ-ಶ್ರಾವಣಿ ಮೊದಲಾದವರು ತಮ್ಮ ಕುಟುಂಬದವರೊಡನೆ ಸೇರಿ ಈ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಅಂತೂ ಇಂತೂ ಒಂದೊಳ್ಳೆ ಶೋ ಗಾಗಿ ಕಿರುತೆರೆ ವೀಕ್ಷಕರು ಕಾಯುವಂತಾಗಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್ ನಿರ್ದೇಶಕ...

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್ ಆಗಸ್ಟ್ 22 ಕ್ಕೆ ಹೊರಬರಲಿದೆ ಸಿ.ಆರ್...

ಹಾರರ್ ಲೋಕದತ್ತ ಕರೆದೊಯ್ಯುವ “ಒಮೆನ್”ಚಿತ್ರದ ಟ್ರೈಲರ್ ರಿಲೀಸ್

ಹಾರರ್ ಲೋಕದತ್ತ ಕರೆದೊಯ್ಯುವ “ಒಮೆನ್”ಚಿತ್ರದ ಟ್ರೈಲರ್ ರಿಲೀಸ್ ವೈಭವ್ ಎಸ್ ಸಂತೋಷ್ ನಿರ್ದೇಶನದ...

ಐತಿಹಾಸಿಕ ಸಿನಿಮಾದಲ್ಲಿ ಅಬ್ಬರಿಸಲಿರುವ ರಿಷಬ್ : ಅಭಿಮಾನಿಗಳಿಗೆ ರಿಷಬ್ ನೀಡಿದ ಗುಡ್ ನ್ಯೂಸ್ ಏನು?

ಐತಿಹಾಸಿಕ ಸಿನಿಮಾದಲ್ಲಿ ಅಬ್ಬರಿಸಲಿರುವ ರಿಷಬ್ : ಅಭಿಮಾನಿಗಳಿಗೆ ರಿಷಬ್ ನೀಡಿದ ಗುಡ್...