ಜೂನ್ 13ಕ್ಕೆ ತೆರೆಯ ಮೇಲೆ ಮಾತನಾಡಲು ಬರುತ್ತಿದೆ “ಮಾತೊಂದ ಹೇಳುವೆ”

Date:

  • ಜೂನ್ 13ಕ್ಕೆ ತೆರೆಯ ಮೇಲೆ ಮಾತನಾಡಲು ಬರುತ್ತಿದೆ “ಮಾತೊಂದ ಹೇಳುವೆ”
  • ಖ್ಯಾತ ರೇಡಿಯೋ ಜಾಕಿ ಮಯೂರ್ ಕಡಿ ಅವರ ಚೊಚ್ಚಲ ನಿರ್ದೇಶನದ ಚಿತ್ರ
  • ಮೈಸೂರಿನಿಂದ ಧಾರವಾಡಕ್ಕೆ ಪ್ರಯಾಣಿಸುವ ಯುವತಿಯೊಬ್ಬರ ಪಯಣದ ಕಥೆಯನ್ನು ಹೇಳುವ ಚಿತ್ರ

ಮಹೇಶ್ವರ ಮೋಷನ್ ಪಿಕ್ಚರ್ಸ್ Maheshwara Motion Pictures ಬ್ಯಾನರ್ ನಲ್ಲಿ ಪ್ರಭು ಸವಣೂರ್ ಮತ್ತು ಅವಿನಾಶ್ ಯುಎಸ್ ಸಹ-ನಿರ್ಮಿಸಿದ ಚಿತ್ರ “ಮಾತೊಂದ ಹೇಳುವೆ” Matonda Heluve ಗೆ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿದ್ದಾರೆ ರೇಡಿಯೋ ಜಾಕಿ ಮಯೂರ್ ಕಡಿ Mayur Kadi. ನಿರ್ದೇಶನದೊಂದಿಗೆ ಚಿತ್ರದ ನಾಯಕತ್ವವನ್ನೂ ನಿರ್ವಹಿಸಿದ್ದಾರೆ. ಚಿತ್ರ ಜೂನ್ 13ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ರೈಲು ಪಯಣದ ಕಥೆ

ಉತ್ತರ ಕರ್ನಾಟಕ ಮೂಲದ ರೇಡಿಯೋ ಜಾಕಿ ಮತ್ತು ಮೈಸೂರಿನಿಂದ ಧಾರವಾಡಕ್ಕೆ ಪ್ರಯಾಣಿಸುವ ಯುವತಿಯೊಬ್ಬರ ಆಕಸ್ಮಿಕ ಭೇಟಿಯ ಕಥೆಯನ್ನು ತೆರೆ ಮೇಲೆ ತರುತ್ತದೆ ಈ ಚಿತ್ರ. ಹೃದಯಸ್ಪರ್ಶಿ ಕಥೆಯಾಗಿ ತೆರೆದುಕೊಳ್ಳುತ್ತಾ, ಸಾಂಸ್ಕೃತಿಕ ವ್ಯತ್ಯಾಸಗಳನ್ನು ತೆರೆದಿಡುತ್ತಾ, ಭಾವನಾತ್ಮಕತೆಯೊಂದಿಗೆ ಎಲ್ಲಾ ವಯಸ್ಸಿನ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುತ್ತದೆ. ಚಿತ್ರತಂಡದಲ್ಲಿ, ರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ.ಸತೀಶ್, ಪ್ರತೀಕ್, ಚೇತನ್ ಮರಂಬೀದ್, ವಿದ್ಯಾಸಾಗರ್ ದೀಕ್ಷಿತ್, ಕಾರ್ತಿಕ್ ಪತ್ತಾರ್ ಮುಂತಾದರಿದ್ದಾರೆ. ಪರ್ವತೇಶ್ ಪೋಲ್ ಛಾಯಾಗ್ರಹಣ, ಉಲ್ಲಾಸ್ ಕುಲಕರ್ಣಿ ಸಂಗೀತ, ಅಭಯ್ ಕಡಿ ಸಂಕಲನ ಮತ್ತು ಪ್ರಸನ್ನ ಕುಮಾರ್ ಎಂಎಸ್ ಹಿನ್ನೆಲೆ ಸಂಗೀತವಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ತೆರೆಯ ಮೇಲೆ ಮಿಂಚಲಿದೆ ತಂದೆ ಮಕ್ಕಳ ಬಾಂಧವ್ಯದ ಕಹಾನಿ: ಬರ್ತಿದೆ ಬಹುನಿರೀಕ್ಷಿತ ಚಿತ್ರಗಳು!

ತಂದೆ ಮಕ್ಕಳ ಬಾಂಧವ್ಯವನ್ನು ಸಾರುವ ಬಹಳಷ್ಟು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಬಂದು...

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ”

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ” ದುಡ್ಡೇ ದೊಡ್ಡಪ್ಪ, ನ್ಯಾಯ...

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್ ಕೊಡಗಿನ ಸ್ವಾದವಿರುವ ವಿಭಿನ್ನ ಚಿತ್ರವಿದು ರಾ.ಸೂರ್ಯ...

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ ಗೀತೆ

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ...