- ಫುಲ್ ಡಿಫೆರೆಂಟ್ ಆಗಿದೆ “ಎಡಗೈಯೇ ಅಪಘಾತಕ್ಕೆ ಕಾರಣ” ಟ್ರೇಲರ್
- ಕಿಚ್ಚ ಸುದೀಪ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದು, ಜೂ.13 ಕ್ಕೆ ತೆರೆಗೆ ಬರಲಿದೆ ಚಿತ್ರ
- ಸಮರ್ಥ್ ಕಡ್ಕೊಳ್ ಅವರು ಚೊಚ್ಚಲ ನಿರ್ದೇಶನ ಸಿನಿಮಾಕ್ಕಿದೆ
ಚಿತ್ರದ ಪೋಸ್ಟರ್ ನಿಂದ ಹಿಡಿದು ಪ್ರಚಾರದವರೆಗೂ ಫುಲ್ ಡಿಫೆರೆಂಟ್ ಪ್ಲಾನ್ ಗಳನ್ನು ಹಾಕ್ತಾನೇ ಬಂದಿರೋ “ಎಡಗೈಯೇ ಅಪಘಾತಕ್ಕೆ ಕಾರಣ” Edagaiye Apaghathakke Karana ಚಿತ್ರತಂಡ, ಇದೀಗ ಟ್ರೇಲರ್ ರಿಲೀಸ್ ಮಾಡಿದ್ದು, ಅದಂತೂ ಇನ್ನೂ ವಿಶೇಷವಾಗಿದೆ. ಕಿಚ್ಚ ಸುದೀಪ್ Kiccha Sudeep ಟ್ರೇಲರ್ ಬಿಡುಗಡೆ ಮಾಡಿದ್ದು, ಮೆಚ್ಚಿಕೊಂಡಿದ್ದಾರೆ. ಹಾಗೇ ಚಿತ್ರವೂ ವಿಷೇಶವಾಗಿರಲಿದೆ ಎಂಬ ನಂಬಿಕೆ ನನಗಿದೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಜೂನ್ 13 ಕ್ಕೆ ತೆರೆ ಮೇಲೆ ಬರಲಿದೆ ಚಿತ್ರ.
ಎಡಗೈ ಬಳಸುವ ವ್ಯಕ್ತಿಗಳ ವ್ಯಥೆಯ ಕಥೆ
ಚಿತ್ರದ ಹೆಸರೇ ಹೇಳುವಂತೆ ಇದೊಂದು ಎಡಗೈ ಹೆಚ್ಚಾಗಿ ಬಳಸುವವರ ವ್ಯಥೆ, ಕಷ್ಟಗಳ ಕಥೆಯನ್ನು ಒಳಗೊಂಡ ಸಿನಿಮಾವಾಗಿದ್ದು ಆಕ್ಷನ್ ಕಟ್ ಹೇಳಿದ್ದಾರೆ ಸಮರ್ಥ್ ಕಡ್ಕೊಳ್ Samarth Kadkol. ದಿಗಂತ್ ಮಂಚಾಲೆ Diganth Manchale, ನಿಧಿ ಸುಬ್ಬಯ್ಯ Nidhi Subbayya, ಧನು ಹರ್ಷ Dhanu Harsha ಮಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸಮರ್ಥ್ ಕಡ್ಕೊಳ್ ಸ್ವತಃ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದು ಅವರೊಂದಿಗೆ ಕೈ ಜೋಡಿಸಿದ್ದಾರೆ, ಶಾಖಹಾರಿ ನಿರ್ಮಾಪಕ ರಾಜೇಶ್ ಕೀಳಂಬಿ ಹಾಗೂ ಬ್ಲಿಂಕ್ ನಿರ್ಮಾಪಕ ರವಿಚಂದ್ರ. ಟ್ರೇಲರ್ ನಿಂದ ಎಲ್ಲರ ನಿರೀಕ್ಷೆಗೆ ಕಾರಣವಾಗಿರುವ ಈ ಚಿತ್ರ ಹೇಗೆ ರೆಸ್ಪಾನ್ಸ್ ಗಳಿಸಲಿದೆ ಕಾದುನೋಡಬೇಕಿದೆ.