- ಹೊಸ ಪ್ರತಿಭೆಗಳ ಚಿತ್ರ; “ಜನರಿಂದ ನಾನು ಮೇಲೆ ಬಂದೆ”
- ನವಿಲುಗರಿ ನವೀನ್ ನಿರ್ದೇಶನದ ‘ಜನರಿಂದ ನಾನು ಮೇಲೆ ಬಂದೆ’
- ಬಹುತೇಕ ಹೊಸ ಪ್ರತಿಭೆಗಳ ಮಿಂಚು
- ಸದ್ಯದಲ್ಲೇ ಚಿತ್ರೀಕರಣ ಆರಂಭ
ಕೆಲವು ವರ್ಷಗಳ ಹಿಂದೆ ಚೆನ್ನೈ ಮತ್ತು ಮಂಗಳೂರಿನಲ್ಲಿ ನಡೆದ ನೈಜ ಕತೆಗಳ ಆಧಾರಿತ ಸಿನಿಮಾ ‘ಜನರಿಂದ ನಾನು ಮೇಲೆ ಬಂದೆ’ Janarinda nanu mele bande ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭಗೊಳ್ಳಲಿದೆ. ಮಂಜುನಾಥ್ ಬಂಡವಾಳ ಹೂಡಿದ್ದು, ನವಿಲುಗರಿ ನವೀನ್ ಆಕ್ಷನ್ ಕಟ್ ಹೇಳಲಿದ್ದಾರೆ. ವಿನೋದ್ ರಾಜ್ ಕ್ಲಾಪ್ ಮಾಡಿ ತಂಡಕ್ಕೆ ಶುಭಹಾರೈಸಿದ್ದಾರೆ.
ಜನರಿಂದ ಮೇಲೆ ಬಂದವರ ಕತೆ ಹೀಗಿದೆ…
ಡ್ಯಾನ್ಸ್ ಥೀಮ್ ಈ ಚಿತ್ರದ ಮುಖ್ಯ ಅಂಶವಾಗಿದ್ದು, ಸ್ಲಂ ಬಾಲಕನೇ ಈ ಚಿತ್ರದ ನಾಯಕ. ಸ್ಲಂನಲ್ಲಿ ಜೀವನ ಮಾಡಿಕೊಂಡು ತಾನುನೃತ್ಯಗಾರ ಆಗಬೇಕೆಂದು ಕಷ್ಟಪಟ್ಟು ಪ್ರಯತ್ನಪಡುವ ಹುಡುಗನ ಕತೆ ಇದು. ಇನ್ನೊಬ್ಬ ನಾಯಕ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ ಡ್ಯಾನ್ಸ್ ಮಾಸ್ಟರ್ ಆಗಬೇಕೆಂದಿರುವ ಹುಡುಗ. ಇಬ್ಬರೂ ಭೇಟಿಯಾಗಿ ತಮ್ಮ ಕನಸುಗಳ ಸಾಕಾರಕ್ಕೆ ಹೇಗೆ ಕೈ ಜೋಡಿಸುತ್ತಾರೆ ಎಂಬುದೇ ಕಥೆಯ ಮುಖ್ಯ ಥೀಮ್.

ಹೊಸ ಪ್ರತಿಭೆಗಳ ತಂಡ
ನಿರ್ದೇಶಕ ನವೀನ್ ಹಾಗೂ ಗಂಧರ್ವರಾಜ್ ಶಂಕರ್ ಇಬ್ಬರು ನಾಯಕರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೆ, ಸೌಂದರ್ಯ ಮತ್ತು ಕೃತ್ತಿಕಾ ದಿವಾಕರ್ ನಾಯಕಿಯರು. ಜಿ.ವಿ.ರಮೇಶ್ ಛಾಯಾಗ್ರಹಣ, ಪ್ರಣವ್ ಸತೀಶ್ ಸಂಗೀತ, ಗೌತಮ್ ಗೌಡ ಸಂಕಲನ ಚಿತ್ರಕ್ಕಿದೆ.