ಶಿವಣ್ಣ ಹೊಸ ಸಿನಿಮಾ ಘೋಷಣೆ:ಪ್ಯಾನ್ ಇಂಡಿಯಾ ಸಿನಿಮಾಕ್ಕೆ ‌ಮಹಾರಾಜನ್ ಡೈರೆಕ್ಟರ್

Date:

  • ಶಿವಣ್ಣ ಹೊಸ ಸಿನಿಮಾ ಘೋಷಣೆ:ಪ್ಯಾನ್ ಇಂಡಿಯಾ ಸಿನಿಮಾಕ್ಕೆ ‌ಮಹಾರಾಜನ್ ಡೈರೆಕ್ಟರ್
  • ಶಿವಣ್ಣ ಚಿಕಿತ್ಸೆಗೆ ತೆರಳಿದ್ದರೂ ಅಭಿಮಾನಿಗಳಿಗೆ ಸಿಹಿಸುದ್ದಿ
  • ಮುಂಬೈ ಮೂಲದ ADD-ON ಫಿಲ್ಮ್ಸ್ ನಿರ್ಮಾಣ ಮಾಡ್ತಿದೆ ‘MB’ ಸಿನಿಮಾ
  • 2025 ರ ಮಾರ್ಚ್ ನಲ್ಲಿ ಶೂಟಿಂಗ್ ಆರಂಭ

ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಿಸುವ ಶಿವಣ್ಣ ಫ್ಯಾನ್ಸ್ ಮೊನ್ನೆ ಶಿವಣ್ಣ ಅಮೇರಿಕಾಗೆ ಹೊರಟಾಗ ಭಾರೀ ಬೇಸರದಲ್ಲಿದ್ದರು. ಶಿವಣ್ಣ ಇನ್ನು ಸಿನಿಮಾ ಮಾಡಲಿಕ್ಕಿಲ್ಲ ಎನ್ನುವ ಬೇಸರ ಅವರ ಮೊಗದಲ್ಲಿತ್ತು.ಆದರೆ ಶಿವಣ್ಣ ಅಭಿಮಾನಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಹೌದು ಶಿವಣ್ಣ ಹೊಸ ಸಿನಿಮಾ ಅನೌನ್ಸ್ ಆಗಿದ್ದು ಇದು ಅಭಿಮಾನಿಗಳು ಖುಷಿ ಪಡುವ ಸಂಗತಿ ಅಲ್ಲದೆ ಮತ್ತೇನು? ಶಿವಣ್ಣ ಅಮೇರಿಕಾಗೆ ತೆರಳಿದ್ದರೂ ಸಿನಿಮಾದೆಡೆಗಿನ ಅವರ ಪ್ರೀತಿ ಅನಾವರಣಗೊಂಡಿದೆ.

ಅಂದ ಹಾಗೆ ಎಂಬಿ ಶೀರ್ಷಿಕೆಯ ಈ ಚಿತ್ರವು ಮುಂಬೈ ಮೂಲದ ADD-ONE ಫಿಲ್ಮ್ಸ್‌ ನಿರ್ಮಾಣ ಮಾಡುತ್ತಿದೆ ಎನ್ನುವುದು ಲೆಟೆಸ್ಟ್ ಅಪ್ಡೇಟ್. ಈ ಸಿನಿಮಾವನ್ನು ಎನ್ ಮಹಾರಾಜನ್ ನಿರ್ದೆಶಿಸುತ್ತಿದ್ದಾರೆ. ವಿಜಯಕಾಂತ್ ಅಭಿನಯದ ಹಿಟ್ ಚಿತ್ರ ವಲ್ಲರಸುಗೆ‌ ಇವರು ಆಕ್ಷನ್ ಕಟ್ ಹೇಳಿದ್ದರು. ಅಲ್ಲದೇ ತಮಿಳು ಚಿತ್ರಗಳನ್ನು ಮತ್ತು ಸನ್ನಿ ಡಿಯೋಲ್ ಅಭಿನಯದ ಹಿಂದಿ ಚಲನಚಿತ್ರವನ್ನು ಸಹ ನಿರ್ದೇಶಿಸಿದ ಖ್ಯಾತಿ ನಿರ್ದೆಶಕರಿಗಿದೆ.

ಆದ್ರೆ ಕನ್ನಡ ಇವರಿಗೆ ಹೊಸತು. ಇದು ಇವರ ಮೊದಲ‌ ಕನ್ನಡ ಸಿನಿಮಾ.ಮೊದಲ ಸಿನಿಮಾವೇ ಶಿವಣ್ಣನ ಸಿನಿಮಾ ಆಗಿರೊದು ಕನ್ನಡಿಗರ ಖುಷಿ. ಇನ್ನೊಂದ್ ವಿಶೇಷ ಅಂದರೆ ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಂತೆ.ಹಾಗಾಗಿ ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿರುವುದು ವಿಶೇಷ. ಅಂದ ಹಾಗೆ ಸಿನಿಮಾದ ಹೆಸರು MB ಅಂತೆ. ವಿಭಿನ್ನವಾಗಿರುವ ಶೀರ್ಷಿಕೆಯ ಅರ್ಥವೇನು?ಯಾಕೆ ಈ ಹೆಸರಿಡಲಾಗಿದೆ ಎನ್ನುವುದನ್ನು ಸಿನಿಮಾ ತಂಡ ಅನೌನ್ಸ್ ಮಾಡಿಲ್ಲ. 2025 ರ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು ಗ್ರಾಮ ಜೀವನದ ಕತೆ ಹೇಳುವ ಎರಡು ಚಿತ್ರಗಳು

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು...

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್ ನಿರ್ದೇಶಕ...

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್ ಆಗಸ್ಟ್ 22 ಕ್ಕೆ ಹೊರಬರಲಿದೆ ಸಿ.ಆರ್...

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು”

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು” ಹೊಸ ರಿಯಾಲಿಟಿ ಶೋ...