ಮಹಾಗುರು ಹಂಸಲೇಖರಿಂದ ಬಂಗಾರದ ಪದಕ ಪಡೆದ ತೀರ್ಥಹಳ್ಳಿ ಗಾಯಕಿ ಶ್ರದ್ಧಾ!

Date:

ಮಹಾಗುರು ಹಂಸಲೇಖರಿಂದ ಬಂಗಾರದ ಪದಕ ಪಡೆದ ತೀರ್ಥಹಳ್ಳಿ ಗಾಯಕಿ ಶ್ರದ್ಧಾ!
ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ತೀರ್ಥಹಳ್ಳಿಯ ಹೆಮ್ಮೆಯ ಗಾಯಕಿ ಕಟ್ಟೆಹಕ್ಕಲು ಸುಧಾಕರ್ ಹಾಗೂ ಶಮಂತ ದಂಪತಿಯ ಪುತ್ರಿ ಶ್ರದ್ಧಾ ರವರು ನಾದಬ್ರಹ್ಮ ಡಾ. ಹಂಸಲೇಖ ರವರ ಸ್ಟುಡಿಯೋದಲ್ಲಿ ನಡೆದ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಮಹಾಗುರು ಹಂಸಲೇಖರವರಿಂದ ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ.

ಶ್ರದ್ಧಾ ರವರು ಪ್ರಸ್ತುತ ತೀರ್ಥಹಳ್ಳಿಯ ಸಹ್ಯಾದ್ರಿ ಸಂಸ್ಥೆಯಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು, ಭಾರತದ ಶ್ರೇಷ್ಠ ಗಾಯಕರಲ್ಲಿ ಒಬ್ಬರಾದ ಡಾ. ಎಸ್ ಪಿ ಬಾಲಸುಬ್ರಮಣ್ಯಂ ರವರ ಜೊತೆ ವೇದಿಕೆಯಲ್ಲಿ ಹಾಡಿದ್ದಾರೆ. ಹಾಗೂ ಇವರು ತನ್ನ ಅತಿ ಚಿಕ್ಕ ವಯಸ್ಸಿನಲ್ಲಿ ಚಂದನ ಟಿವಿ ಸೇರಿದಂತೆ ಕನ್ನಡದ ಹಲವು ವಾಹಿನಿಯಲ್ಲಿ ಕಾರ್ಯಕ್ರಮ ನೀಡಿದ್ದು, ತನ್ನ ಹತ್ತನೇ ವಯಸ್ಸಿನಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಉದಯ ಸಿಂಗರ್ಸ್ ಜೂನಿಯರ್ಸ್ ಎಂಬ ಕಾರ್ಯಕ್ರಮದಲ್ಲಿ ಫಿನಾಲೆಯವರೆಗೂ ತಲುಪಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ತೀರ್ಥಹಳ್ಳಿಯ ಗಾಯಕಿ ಶ್ರದ್ಧಾ ರವರ ಸಾಧನೆಗೆ ಸ್ಥಳೀಯರು ಶುಭ ಹಾರೈಸಿದ್ದು, ಇವರು ಇನ್ನೂ ಹೆಚ್ಚಿನ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಾಲೂಕಿಗೆ ಹೆಮ್ಮೆತರಲಿ ಎಂಬುದು ನಮ್ಮೆಲ್ಲರ ಹಾರೈಕೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ತೆರೆಯ ಮೇಲೆ ಮಿಂಚಲಿದೆ ತಂದೆ ಮಕ್ಕಳ ಬಾಂಧವ್ಯದ ಕಹಾನಿ: ಬರ್ತಿದೆ ಬಹುನಿರೀಕ್ಷಿತ ಚಿತ್ರಗಳು!

ತಂದೆ ಮಕ್ಕಳ ಬಾಂಧವ್ಯವನ್ನು ಸಾರುವ ಬಹಳಷ್ಟು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಬಂದು...

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ”

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ” ದುಡ್ಡೇ ದೊಡ್ಡಪ್ಪ, ನ್ಯಾಯ...

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್ ಕೊಡಗಿನ ಸ್ವಾದವಿರುವ ವಿಭಿನ್ನ ಚಿತ್ರವಿದು ರಾ.ಸೂರ್ಯ...

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ ಗೀತೆ

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ...