- ಏಪ್ರಿಲ್ ಮೂರನೇ ವಾರದಲ್ಲಿ ಬೆಳ್ಳಿತೆರೆಯಲ್ಲಿ ಉದಯಿಸಲಿದೆ “ಉದಯ ಸೂರ್ಯ”
- ಹೊಸ ಸಿನಿತಂಡದ ವಿಭಿನ್ನ ಪ್ರಯತ್ನ “ಉದಯಸೂರ್ಯ”
- ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ ಎಸ್.ಎಸ್ ಪ್ರಕಾಶ್ ರಾಜ್
ಶ್ರೀ ಸಿದ್ಧೇಶ್ವರ ಫಿಲ್ಮ್ಸ್ Sri Siddheshwara Films ನಿರ್ಮಾಣದ, ಎಸ್.ಎಸ್.ಪ್ರಕಾಶ್ ರಾಜ್ S.S. Prakash Raj ನಿರ್ದೇಶನ ಹಾಗೂ ನಾಯಕತ್ವದ ಚಿತ್ರ “ಉದಯ ಸೂರ್ಯ” Udaya Surya. ಬಹುತೇಕ ಹೊಸಬರೇ ತಂಡದಲ್ಲಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದು, ಚಿತ್ರ ಏಪ್ರಿಲ್ ಮೂರನೇ ವಾರದಲ್ಲಿ ಹೊರಬರಲಿದೆ.
ಹಳ್ಳಿ ಸೊಗಡಿನ ಚಿತ್ರ
ನೈಜ ಘಟನೆಯನ್ನಾಧರಿಸಿ ಕಥೆಯನ್ನು ಹೆಣೆಯಲಾಗಿದ್ದು, ಪ್ರೀತಿಯಲ್ಲಿ ಮೋಸ ಹೋದ ಇಬ್ಬರು ಸ್ನೇಹಿತರ ಕಥೆ ಇದಾಗಿದೆ. ಹಳ್ಳಿ ಸೊಗಡಿನ ಭಾಷೆಯನ್ನು ಚಿತ್ರದಲ್ಲಿ ಬಳಸಿಕೊಂಡಿರುವುದು ಚಿತ್ರಕ್ಕೆ ಮೆರುಗು ನೀಡಿದೆ. ತ್ರಿವೇಣಿ ಚಿತ್ರದ ನಾಯಕಿಯಾಗಿ ಮಿಂಚಿದ್ದಾರೆ. ಏಳು ಹಾಡುಗಳಿದ್ದು, ಯಶವಂತ ಭೂಪತಿ ಸಂಗೀತ ಸಂಯೋಜನೆಯಿದೆ. ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಮಲ್ಲಿ ಸಂಕಲನವಿದೆ. ಶಿವಮೊಗ್ಗ, ನ್ಯಾಮತಿ, ಹೊನ್ನಾಳಿ, ಹಂಚಿನ ಸಿದ್ದಾಪುರ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.