ಸೆಟ್ಟೇರಲಿದೆ “ಕಾವೇರಿ ತೀರದಲ್ಲಿ ಮುಂಗಾರಿದೆ”

Date:

  • ಸೆಟ್ಟೇರಲಿದೆ “ಕಾವೇರಿ ತೀರದಲ್ಲಿ ಮುಂಗಾರಿದೆ”
  • ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಆರ್.ಕೆ.ಗಾಂಧಿ ನಿರ್ದೇಶಿಸಲಿರುವ ಚಿತ್ರ
  • ಉದಯ್ ಹಾಗೂ ಸುಪ್ರೀತಾ ರಾಜ್ ನಾಯಕತ್ವದಲ್ಲಿ ಮೂಡಿಬರಲಿದೆ ಹೊಸ ಸಿನಿಮಾ

ವಿಭಿನ್ನ ಶೀರ್ಷಿಕೆಯಿಂದ ಸಿನಿಮನಸ್ಸುಗಳ‌ ಗಮನ ಸೆಳೆಯುತ್ತಿದೆ “ಕಾವೇರಿ ತೀರದಲ್ಲಿ ಮುಂಗಾರಿದೆ” Kaveri Theeradalli Mungaride ಮೂವಿ. ಸದ್ಯದಲ್ಲೇ ಸೆಟ್ಟೇರಲಿರುವ ಈ ಸಿನಿಮಾದ ಹೆಸರಿನಂತೆ ಕಂಟೆಂಟ್ ಕೂಡಾ ವಿಭಿನ್ನವಾಗಿರಲಿದೆಯಂತೆ. ತೆಲುಗು ಚಿತ್ರದಲ್ಲಿ ಪ್ರಸಿದ್ಧರಾಗಿರುವ ಆರ್.ಕೆ.ಗಾಂಧಿ R.K. Gandhi ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಸ್ನೇಹಾಲಯಂ ಕ್ರಿಯೇಷನ್ಸ್ Snehalayam Creations ಬ್ಯಾನರ್ ಅಡಿ ಬಂಡವಾಳ ಹೂಡಿದ್ದಾರೆ ನವೀನ್ ಕುಮಾರ್ ಗೌಡ, ಗೋಪಾಲ ಸ್ವಾಮಿ ಹಾಗೂ ವಸಂತ ನಾಯಕ್.

ಮನುಷ್ಯನ ಜೀವನವನ್ನು ಈ ಚಿತ್ರದಲ್ಲಿ ಸಮುದ್ರ ತೀರಕ್ಕೆ ಹೋಲಿಸಲಾಗಿದೆಯಂತೆ. ಮನುಷ್ಯನ ಜೀವನ ಸಮುದ್ರ ತೀರದಂತೆ‌, ಕೆಲವೊಮ್ಮೆ ಶಾಂತವಾಗಿ ಹರಿಯುತ್ತಿದ್ದರೆ, ಮತ್ತೆ ಕೆಲವೊಮ್ಮೆ ಭೋರ್ಗರೆಯುವ ಅಲೆಗಳಂತೆ ಕಷ್ಟಗಳನ್ನೂ ಅನುಭವಿಸಬೇಕಾಗುತ್ತದೆ. ಜೀವನ ಯಾವಾಗ ಹೇಗೆ ಬದಲಾಗುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇದನ್ನೇ ಕಥಾಹಂದರವಾಗಿಟ್ಟುಕೊಂಡು ನಿರ್ಮಿಸಲಾಗುತ್ತಿದೆ ಈ ಮೂವಿ. ಉದಯ್ Uday ಹಾಗೂ ಸುಪ್ರೀತಾ ರಾಜ್ Supreetha Raj ಚಿತ್ರದ ನಾಯಕತ್ವವಹಿಸಿದ್ದು, ಮಮತಾ, ಹೊಸಪೇಟೆ ರಾಘವೇಂದ್ರ, ಆಂಜಿನಪ್ಪ, ಅನ್ನಪೂರ್ಣ, ಸಿದ್ದಯ್ಯ ಹಿರೇಮಠ್, ಶೋಭರಾಜ್, ಪುಷ್ಪಗೌಡ ತಾರಾಗಣದಲ್ಲಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...